ಅವನು ಮತ್ತೆ ಶ್ರಾವಣಿ, ಶುರುವಾಗ್ತಿದೆ ಹೊಚ್ಚ ಹೊಸ ಭಾವನಾತ್ಮಕ ಪ್ರೀತಿ ಕಥೆ ಇದೇ ಅಕ್ಟೋಬರ್ 2 ರಿಂದ ರಾತ್ರಿ 10 ಗಂಟೆಗೆ !

Avanu Mathe Shravani Serial

ಸ್ಟಾರ್ ಸುವರ್ಣ – ಅವನು ಮತ್ತೆ ಶ್ರಾವಣಿ ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಹೊಸತನದೊಂದಿಗೆ ವಿಭಿನ್ನ ಕಥಾ ಹಂದರವುಳ್ಳ ಧಾರಾವಾಹಿಗಳನ್ನು ನೀಡುತ್ತಿದೆ. ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿ 900 ಕ್ಕೂ ಹೆಚ್ಚು ಯಶಸ್ವಿ ಸಂಚಿಕೆಗಳೊಂದಿಗೆ ಪ್ರೇಕ್ಷಕರ ಮನಗೆದ್ದು ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಇದೀಗ ಅದೇ ಹೆಸರಿನಲ್ಲಿ ಹೊಸದೊಂದು ಲವ್ ಸ್ಟೋರಿಯನ್ನು ಪ್ರಸಾರ ಮಾಡಲು ಸ್ಟಾರ್ ಸುವರ್ಣ ಸಜ್ಜಾಗಿದೆ. ಅವನು ಮತ್ತೆ … Read more

ಸುವರ್ಣ ಸಂಕಲ್ಪ‌, ಯಶಸ್ವಿ 1000 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ ಸ್ಟಾರ್ ಸುವರ್ಣದ ದೈನಂದಿನ ಕಾರ್ಯಕ್ರಮ

Suvarna Sankalp 1000 Episodes

ಕಾರ್ಯಕ್ರಮವು ಪ್ರತಿದಿನ ಬೆಳಗ್ಗೆ 7.30 ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತದೆ – ಸುವರ್ಣ ಸಂಕಲ್ಪ ಕರ್ನಾಟಕದ ಜನತೆಗೆ ಪ್ರತಿದಿನ ಮುಂಜಾನೆ ದೇವರ ದರ್ಶನದ ಜೊತೆಗೆ ಜೀವನದ ಹಾದಿ‌ಯನ್ನು ಮಾರ್ಗದರ್ಶಿಸಿ, ಅಭಿಮಾನಿ‌ ವೀಕ್ಷಕರಿಗೆ ಭಾರತದಲ್ಲಿರುವ ಹೆಸರಾಂತ ದೈವಸಾನಿದ್ಯವನ್ನು ತೋರಿಸುತ್ತಿರುವುದು ಸ್ಟಾರ್ ಸುವರ್ಣ ವಾಹಿನಿಯ ‘ಸುವರ್ಣ ಸಂಕಲ್ಪ’ ಕಾರ್ಯಕ್ರಮ. ಕರ್ನಾಟಕ ಮಾತ್ರವಲ್ಲದೆ ಭಾರತದ ಹೆಸರಾಂತ ಭಕ್ತತಾಣಗಳಾದ ಮಥುರಾ, ಅಯೋಧ್ಯಾ, ರಾಮೇಶ್ವರಂ, ಶ್ರೀಲಂಕಾ, ಕಾಶಿ, ಮಂತ್ರಾಲಯ ಸೇರಿದಂತೆ ಇನ್ನೂ ಹಲವು ದೈವತಾಣಗಳ ಇತಿಹಾಸ, ಅಲ್ಲಿನ ವಿಶೇಷ, ಹಾಗು ಮಹತ್ವವನ್ನು ಕನ್ನಡಿಗರಿಗೆ ತೋರಿಸಿ … Read more

ಡೇರ್ ಡೆವಿಲ್ ಮುಸ್ತಾಫಾ – ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಕಾಮಿಡಿ ಎಂಟರ್ಟೈನರ್ ಸಿನಿಮಾ ಸೆಪ್ಟೆಂಬರ್ 17 ರಂದು ಸಂಜೆ 6 ಗಂಟೆಗೆ..!

Daredevil Musthafa Movie WTP

ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ದಿನದಿಂದ ದಿನಕ್ಕೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ‘ಡೇರ್ ಡೆವಿಲ್ ಮುಸ್ತಾಫಾ’ ಇದು ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧಾರಿತ ಸಿನಿಮಾ. ಕರ್ನಾಟಕದ ಚಿಕ್ಕಮಗಳೂರಿನ ಚಿಕ್ಕ ಪಟ್ಟಣವಾದ ಅಬಚೂರಿನಲ್ಲಿ ರಾಮಾನುಜ ಅಯ್ಯಂಗಾರ್ ಮತ್ತು ಅವನ ಗೆಳೆಯರ ಗುಂಪು ಶಾಲೆಯನ್ನು ಮುಗಿಸಿ ಕಾಲೇಜಿಗೆ ಸೇರಿರುತ್ತಾರೆ. ಅದೇ ಕಾಲೇಜಿಗೆ ಎಂಟ್ರಿ ಕೊಡ್ತಾನೆ … Read more

ಸರ್ಕಸ್ – ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರೈಮ್ ಟೈಮ್ ನಲ್ಲಿ ಬರ್ತಿದೆ ಈ ವರ್ಷದ ಸೂಪರ್ ಹಿಟ್ ತುಳು ಸಿನಿಮಾ ಸೆಪ್ಟೆಂಬರ್

Circus Movie in Tulu

10 ರಂದು ಸಂಜೆ 6 ಗಂಟೆಗೆ – ಸರ್ಕಸ್, ಸ್ಟಾರ್ ಸುವರ್ಣ ಕನ್ನಡ ಕಿರುತೆರೆಯಲ್ಲಿ ‘ತುಳು’ ಭಾಷೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿರುವ ಕನ್ನಡದ ಮೊದಲ ವಾಹಿನಿ ‘ಸ್ಟಾರ್ ಸುವರ್ಣ’. 2010 ರಲ್ಲಿ ಸುವರ್ಣ ವಾಹಿನಿಯು “ಗೊತ್ತಾನಗ ಪೊರ್ತಾಂಡ್” ಎಂಬ ‘ತುಳು’ ಧಾರಾವಾಹಿಯನ್ನು ಪ್ರಸಾರ ಮಾಡಿ ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿತ್ತು. ತದನಂತರ ದೇಶದಾದ್ಯಂತ ಇತಿಹಾಸ ಸೃಷ್ಟಿಸಿದ “ಕಾಂತಾರ” ಸಿನಿಮಾವನ್ನು ‘ತುಳು’ ಭಾಷೆಯಲ್ಲಿ ಪ್ರಸಾರಮಾಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೀಗ ಈ ವರ್ಷದ ಸೂಪರ್ ಹಿಟ್ ತುಳು … Read more

ಶಾಂಭವಿ – ಉದಯ ಟಿವಿಯಲ್ಲಿ ಅದ್ದೂರಿ ಹೊಸ ಧಾರಾವಾಹಿ “ಶಾಂಭವಿ” ಸೇಪ್ಟಂಬರ್‌ ೧೧ ರಿಂದ ಸೋಮವಾರದಿಂದ ಶನಿವಾರ ರಾತ್ರಿ ೭.3೦ಕ್ಕೆ

Udaya TV Serial Shambhavi

ಉದಯ ಟಿವಿ ಹೊಸ ಥರದ ಕಥೆಗಳ ಮೂಲಕ ಪುಟಾಣಿಗಳಿಂದ ವಯೋವೃದ್ಧರವರೆಗೆ ಜನಮನ ಗೆಲ್ಲುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಲ್ಲಿ ಸಹಜತೆ, ಕೌತುಕಗಳ ಜೊತೆ ಸೃಜನಾತ್ಮಕ ವಿಷಯಗಳಿಂದ ವೀಕ್ಷಕರಿಗೆ ರಸದೌತಣ ನೀಡುತ್ತಿವೆ. ಕನ್ಯಾದಾನ, ಆನಂದರಾಗ, ಅಣ್ಣತಂಗಿ, ಸೇವಂತಿ, ಜನನಿ, ರಾಧಿಕಾ, ಗೌರಿಪುರದ ಗಯ್ಯಾಳಿಗಳು ಇತ್ಯಾದಿ ಕೌಟುಂಬಿಕ ಧಾರವಾಹಿಗಳಿಂದ ವೀಕ್ಷಕರನ್ನು ರಂಜಿಸುತ್ತಿರುವ ಉದಯ ಟಿವಿ ಈಗ ವಿನೂತನ ಶೈಲಿಯ ಅದ್ಭುತ ನಿರೂಪಣೆಯ ಅದ್ದೂರಿ ʻಶಾಂಭವಿʼ ಎಂಬ ಹೊಸ ಕಥಾನಕವನ್ನು ನಿಮ್ಮ ಮುಂದೆ ತರಲು ಸಜ್ಜಾಗುತ್ತಿದೆ. ʻಸಿಂಪಲ್‌ ಆಗಿ ಒಂದು ಲವ್‌ ಸ್ಟೋರಿʼ ಖ್ಯಾತಿಯ … Read more

೧ ಗಂಟೆಯ ಮಹಾಸಂಚಿಕೆಗಳು ಮಹಾಸಂಚಿಕೆ ಮಹಾಮನೋರಂಜನೆ

ಜೀ ಕನ್ನಡ ಚಾನೆಲ್

ಕರ್ನಾಟಕದ ಜನರನ್ನ ಮನೋರಂಜಿಸುವಲ್ಲಿ ಸದಾ ಮುಂಚೂಣಿಯಲ್ಲಿರವ ಜೀ ಕನ್ನಡ ವಾಹಿನಿ,ಪ್ರತಿ ಬಾರಿಯು ಹೊಸತನಕ್ಕೆ ಹಾತೊರೆಯುತ,ಹೊಸತೇನನ್ನೋ ಜನರಿಗೆ ತಲುಪಿಸುವಲ್ಲಿ ಸದಾ ಕಾರ್ಯಪ್ರವೃತ್ತವಾಗಿರುತ್ತದೆ. ಸಂಜೆ ೫.೩೦ ಆಯ್ತು ಎಂದರೆ ಮನೆಗಳಲ್ಲಿ ಒಂದು ತರಹದ ಸಂಭ್ರಮ ಮನೆಮಂದಿಯೆಲ್ಲ ತಮ್ಮ ಕೆಲಸ ಮುಗಿಸಿ ಟಿವಿ ಮುಂದೆ ಹಾಜರಾಗಿಬಿಡುತ್ತಾರೆ. ಯಾಕಂದ್ರೆ ಝೀ ಕನ್ನಡ ತನ್ನ ಮನೋರಂಜನೆಯ ಕೆಲಸವನ್ನ ಶುರುಮಾಡುವ ಸಮಯವದು.ಇಂತಹ ಝೀ ಕನ್ನಡ ಈ ಬಾರಿ ತನ್ನ ಪ್ರಿಯ ವೀಕ್ಷಕರಿಗಾಗಿ ಅವರ ಮನೆಮನ ಮೆಚ್ಚಿದ ೫ ಧಾರಾವಾಹಿಗಳ ಮಹಾಸಂಚಿಕಯನ್ನ ಪ್ರಸಾರಮಾಡಲು ನಿರ್ಧರಿಸಿದೆ, ಈ ಪ್ರಯತ್ನವು … Read more

ಕಾವೇರಿ ಕನ್ನಡ ಮೀಡಿಯಂ – ಕನ್ನಡದ ಕಂಪನ್ನು ಪಸರಿಸಲು ಬರ್ತಿದೆ ಹೊಚ್ಚ ಹೊಸ ಧಾರಾವಾಹಿ – ಆಗಸ್ಟ್ 28 ರಿಂದ ರಾತ್ರಿ 7.30 ಕ್ಕೆ.

Kaveri Kannada Medium Serial

ಕನ್ನಡದ ಕಂಪನ್ನು ಪಸರಿಸಲು ಬರ್ತಿದೆ ಹೊಚ್ಚ ಹೊಸ ಧಾರಾವಾಹಿ ಕಾವೇರಿ ಕನ್ನಡ ಮೀಡಿಯಂ ಪ್ರೇಕ್ಷಕರನ್ನು ಸದಾಕಾಲ ಹೊಸತನದೊಂದಿಗೆ ರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಲಿದೆ ಹೊಚ್ಚ ಹೊಸ ವಿನೂತನ ಧಾರಾವಾಹಿ “ಕಾವೇರಿ ಕನ್ನಡ ಮೀಡಿಯಂ”. ಹೆಸರೇ ಹೇಳೋ ತರ ಇದು ಕನ್ನಡದ ಕಂಪು ತುಂಬಿರೋ ಸೀರಿಯಲ್ ಅಂತಾನೆ ಹೇಳಬಹುದು. ಕನ್ನಡ ಬರೀ ಭಾಷೆ ಅಲ್ಲ ಬದುಕು ಅಂತ ನಂಬಿರೋ ಊರಿನಲ್ಲಿ ಹುಟ್ಟಿರೋ ಕಾವೇರಿ ಅನ್ನೋ ಹೆಣ್ಣು ಮಗಳು ವೃತ್ತಿಯಲ್ಲಿ ಶಿಕ್ಷಕಿ, ಅಪ್ಪ ಕಟ್ಟಿರೋ ಕನ್ನಡ ಶಾಲೆಯನ್ನು ಕಾಪಾಡೋದಕ್ಕಾಗಿ … Read more

ಜಗಧಾತ್ರಿ – ಆಗಸ್ಟ್ 21 ರಿಂದ ಜೀ ತೆಲುಗು ವಾಹಿನಿಯಲ್ಲಿ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7:3೦ ಕ್ಕೆ ಪ್ರಾರಂಭವಾಗಲಿದೆ

Jagadhatri Serial Zee Telugu

ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7:3೦ ಕ್ಕೆ ಪ್ರಾರಂಭವಾಗಲಿದೆ – ಜಗಧಾತ್ರಿ ಆಗಸ್ಟ್ 21 ರಿಂದ ಜೀ ತೆಲುಗು ವಾಹಿನಿಯಲ್ಲಿ ‘ಜಗಧಾತ್ರಿ’ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7:3೦ ಕ್ಕೆ ಪ್ರಾರಂಭವಾಗಲಿದೆ. ಈಗಾಗಲೇ ಜೀ ವಾಹಿನಿಯಲ್ಲಿ ಹಿಟ್ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಈ ಸಾಲಿಗೆ ‘ಜಗಧಾತ್ರಿ’ ಸೇರ್ಪಡೆ. ದೀಪ್ತಿ ಮಾನೆ, ದರ್ಶ್ ಚಂದ್ರಪ್ಪ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಜಗಧಾತ್ರಿ’ ಈ ತಿಂಗಳ 21 ರಿಂದ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗಲಿದೆ. ಧಾರಾವಾಹಿ ಕಥೆ ಏನು? – ಜಗಧಾತ್ರಿ … Read more

ಸ್ಟಾರ್ ಸುವರ್ಣ ವಾಹಿನಿಯ ವತಿಯಿಂದ ‘ಲಾಲ್ ಬಾಗ್ ಪುಷ್ಪಪ್ರದರ್ಶನ’ ದಲ್ಲಿ “ಕಾವೇರಿ ಕನ್ನಡ ಮೀಡಿಯಂ” ಧಾರಾವಾಹಿಗೆ ಭರ್ಜರಿ ಪ್ರಮೋಷನ್…!

Kaveri Kannada Medium Serial Promotion

ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಸ್ವಾತಂತ್ಯ ದಿನಾಚರಣೆಯ ಪ್ರಯುಕ್ತ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಬಾರಿ ಕೆಂಗಲ್ ಹನುಮಂತಯ್ಯ ರವರ ಪ್ರತಿಮೆಯನ್ನು ಹೂವಿನಿಂದ ಮಾಡಲಾಗಿದ್ದು, ಜೊತೆಗೆ ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ನಿರ್ಮಿಸಿರುವ ವಿಧಾನಸೌಧ ಹಾಗು ಶಿವಪುರ ಸತ್ಯಾಗ್ರಹಸೌಧದ ಪುಷ್ಪ ಮಾದರಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಹೀಗಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಆರಂಭವಾಗಲಿರುವ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯ ಪ್ರಮೋಷನ್ ಅನ್ನು ಭರ್ಜರಿಯಾಗಿ ವಾಹಿನಿಯು ಮಾಡುತ್ತಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ, ಉಧೋ … Read more

ಸ್ವಾತಂತ್ಯ ದಿನಾಚರಣೆಯ ಪ್ರಯುಕ್ತ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಸೂಪರ್ ಹಿಟ್ ಸಿನಿಮಾ “ಹೊಯ್ಸಳ” | ಇದೇ ಆಗಸ್ಟ್ 13 ರಂದು ಭಾನುವಾರ ಸಂಜೆ 6 ಗಂಟೆಗೆ..!

Gurudev Hoysala Movie Premier

ಪ್ರೇಕ್ಷಕರ ಮನರಂಜನೆಗಾಗಿ ಸದಾಕಾಲ ಹೊಸತನವನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ “ಗುರುದೇವ್ ಹೊಯ್ಸಳ” ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಸ್ವಾತಂತ್ಯ ದಿನಾಚರಣೆಯ ಪ್ರಯುಕ್ತ ಈ ಸಿನಿಮಾವು ಕಿರುತೆರೆಯಲ್ಲಿ ರಾರಾಜಿಸಲಿದೆ. ಪಟ್ಟಣದ ಅತ್ಯಂತ ನಿಷ್ಠಾವಂತ ಹಾಗು ಶಕ್ತಿಶಾಲಿ ಪೊಲೀಸ್ ಅಧಿಕಾರಿ ಗುರುದೇವ್ ಹೊಯ್ಸಳ. ರಾಜಕಾರಣಿಗಳು ಹಾಗು ದರೋಡೆಕೋರರಿಂದ ಭೂ ಮಾಫಿಯಾವನ್ನು ತಡೆಗಟ್ಟುವಲ್ಲಿ ಗುರುದೇವ್ ಹೇಗೆ ಯಶಸ್ವಿಯಾಗುತ್ತಾರೆ ಎಂಬುದು ಈ ಸಿನಿಮಾದ ಮುಖ್ಯ ಕಥೆ. ಇನ್ನು … Read more