ಕನ್ನಡದ ನಂ.1 ಕಿರುತೆರೆ ವಾಹಿನಿ ಜೀ ಕನ್ನಡ ಈ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ತನ್ನ ಜನಪ್ರಿಯ ರಿಯಾಲಿಟಿ ಶೋಗಳಾದ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಹಾಗೂ “ಕಾಮಿಡಿ ಕಿಲಾಡಿಗಳು” ಎರಡೂ ಕಾರ್ಯಕ್ರಮಗಳ “ಮಹಾಸಂಭ್ರಮ” ಪ್ರಸಾರವಾಗಲಿದೆ. ಲಾಕ್ ಡೌನ್ ಸಮಯದಲ್ಲಿ ಧಾರಾವಾಹಿಗಳ ಮರು ಪ್ರಸಾರದ ಸಮಸ್ಯೆಯಿಲ್ಲದೆ ಹೊಚ್ಚಹೊಸ ಕಂಟೆಂಟ್ ಪ್ರಸಾರವಾಗಲಿದೆ.
ಜೀ ಕನ್ನಡ ಪ್ರಾರಂಭದಿಂದಲೂ ತನ್ನ ಅಚ್ಚುಮೆಚ್ಚಿನ ವೀಕ್ಷಕರಿಗೆ ವಿಶೇಷ ಮನರಂಜನೆಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಅದ್ಭುತ ನೃತ್ಯ, ಸರಿಗಮಪದ ಅದ್ಭುತ ಸಂಗೀತ ಕಾರ್ಯಕ್ರಮ ಹಾಗೂ ವಿನೋದಮಯ ಕಾಮಿಡಿ ಕಿಲಾಡಿಗಳು ವೀಕ್ಷಕರನ್ನು ರಂಜಿಸಿವೆ. ಪ್ರತಿವಾರ ವಿನೂತನ ಬಗೆಯ ಕಾರ್ಯಕ್ರಮಗಳನ್ನು ರೂಪಿಸುವ ಈ ವಾಹಿನಿಯು ಈ ಬಾರಿ ಮೂರು ಜನಪ್ರಿಯ ರಿಯಾಲಿಟಿ ಶೋಗಳ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ.
ಅನುಶ್ರೀ ನಿರೂಪಣೆಯ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದು ಜನಮನ್ನಣೆ ಪಡೆದಿದೆ. ಹಾಗೆಯೇ ನಟ ಮಾಸ್ಟರ್ ಆನಂದ್ ನಿರೂಪಣೆಯ “ಕಾಮಿಡಿ ಕಿಲಾಡಿಗಳು” ಇಡೀ ಕರ್ನಾಟಕವನ್ನು ಹಾಸ್ಯದಲ್ಲಿ ಮುಳುಗಿಸಿದೆ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ಅಭೂತಪೂರ್ವ ಮನರಂಜನೆಯ ಭರವಸೆ ನೀಡಲಿದೆ. ಸರಿಗಮಪ ತನ್ನ ಪ್ರತಿ ಸೀಸನ್ ಗೂ ಜನಪ್ರಿಯತೆ ಹೆಚ್ಚಿಸಿಕೊಂಡು ಹಲವು ಜನಪ್ರಿಯ ಗಾಯಕರನ್ನು ಹುಟ್ಟು ಹಾಕಿದೆ. ಈ ಗಾಯಕರು ಜೀ ಕನ್ನಡ ವೀಕ್ಷಕರಿಗೆ ಮನರಂಜನೆಯ ಭರಪೂರ ನೀಡಲಿದೆ.
ವಾರಾಂತ್ಯದ ಭರಪೂರ ರಂಜನೆಗೆ ಅನುಶ್ರೀ, ಆನಂದ್ ನಿರೂಪಣೆ ಮೆರುಗು ಹೆಚ್ಚಿಸಲಿದೆ. ಈ ವಾರಾಂತ್ಯಕ್ಕೆ ನೀವು ಬೇರೆ ಯಾವುದೇ ಚಾನೆಲ್ ಹುಡುಕಾಟ ನಡೆಸದೆ ಜೀ ಕನ್ನಡ ಟ್ಯೂನ್ ಆಗಿರಿ ಹಾಗೂ ಮನರಂಜನೆಯನ್ನು ಹೊಂದಿರಿ.
ಈ ಎರಡೂ ಕಾರ್ಯಕ್ರಮಗಳನ್ನು ವೀಕ್ಷಿಸಲು ನಿಮ್ಮ ನೆಚ್ಚಿನ ಜೀ ಕನ್ನಡ ಹಾಗೂ ಜೀ ಕನ್ನಡ ಎಚ್.ಡಿ.ಗೆ ಟ್ಯೂನ್ ಆಗಿರಿ.
ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…
ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯು…
ಮನೋರಂಜನೆಯ ಮಾತು ಬಂದಾಗಲೆಲ್ಲ ಎಲ್ಲಾ ಮನೆಯ ಟಿವಿಯು ಟ್ಯೂನ್ ಆಗೋದೇ ಜೀ಼ ಕನ್ನಡಕ್ಕೆ. ಕರುನಾಡನ್ನ ದಶಕಗಳಿಂದ ಮನೋರಂಜಿಸುತ್ತ ಬಂದಿರುವ ಜೀ಼…
ಉದಯ ಟಿವಿ - ಸೂರ್ಯವಂಶ ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ…
ಜೀ ಕನ್ನಡ ಚಾನೆಲ್ - ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್ ಹೆಮ್ಮೆಯ ಕನ್ನಡಿಗ, ಜೀ಼ ಕುಟುಂಬದಂತಹ ಪ್ರತಿಷ್ಟಿತ…