ಯುವರತ್ನ 2021 ರ ಕನ್ನಡ ಭಾಷೆಯ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಸಂತೋಷ್ ಆನಂದ್ ರಾಮ್ ಬರೆದು ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್, ಸಯೀಶಾ, ಧನಂಜಯ್, ಪ್ರಕಾಶ್ ರಾಜ್, ದಿಗಂತ್ ಮತ್ತು ಸಾಯಿ ಕುಮಾರ್ ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಎಸ್.ಥಮನ್ ಸಂಯೋಜಿಸಿದ್ದಾರೆ, ಛಾಯಾಗ್ರಹಣವನ್ನು ವೆಂಕಟೇಶ್ ಅಂಗುರಾಜ್ ಮತ್ತು ಜ್ಞಾನೀಶ್ ಬಿ ಮಠದ್ ಸಂಕಲನವನ್ನು ಮಾಡಿದ್ದಾರೆ.
ಯುವರತ್ನವು ಉದ್ಯಮಿಗಳ ನೀಚತನಕ್ಕೆ ಬಲಿಯಾಗುವ ಪ್ರತಿಭಾವಂತ ವಿದ್ಯಾರ್ಥಿಯ ಆತ್ಮಹತ್ಯೆ ಕುರಿತು ಕಥೆ ಪ್ರಾರಂಭವಾಗುತ್ತದೆ. ಈ ಸೂಕ್ಷ್ಮ ಹೋರಾಟವು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಾಲೇಜುಗಳಿಗೆ ನೆರಳು ನೀಡಲು ಪ್ರಯತ್ನಿಸುತ್ತಿರುವ ಖಾಸಗಿ ಕಾಲೇಜುಗಳ ಮೇಲೆ ದೊಡ್ಡ ಅಪಾಯವನ್ನು ಉಂಟುಮಾಡುವ ಹುನ್ನಾರದ ಸನ್ನಿವೇಶದ ಮಧ್ಯೆ ಅರ್ಜುನ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಸೇರುತ್ತಾನೆ. ಅವನು ಯಾರು? ಅವನ ಧ್ಯೇಯವೇನು? ಈ ಚಳುವಳಿಗೆ ಅರ್ಜುನ್ ಹೇಗೆ ಕಾರಣವಾಗುತ್ತಾನೆ? ಎಂಬುದೆ ಈ ಚಿತ್ರದ ಸಾರಾಂಶ.
ಯುವರತ್ನ ಪುನೀತ್ ರಾಜ್ಕುಮಾರ್,ಪವರ್ ಸ್ಟಾರ್ ಅಭಿಮಾನಿಗಳಿಗೆ ನೀಡಿದ ಟ್ರೀಟ್ ಆಗಿದೆ. ಇಲ್ಲಿ ಪುನೀತ್ರವರ ನಟನೆ,ಫೈಟಿಂಗ್, ನೃತ್ಯ, ಸಂಭಾಷಣೆಯಿಂದ ವೀಕ್ಷರ ಮನಗೆದ್ದಿದ್ದಾರೆ ಮತ್ತು ತನ್ನ ನಗುವಿನೊಂದಿಗೆ ಮೋಡಿ ಮಾಡುತ್ತಾನೆ. ಈ ಚಿತ್ರ ತಂಡ ಬಹಳಷ್ಟು ಪರಿಚಿತ ಮುಖಗಳನ್ನು ಹೊಂದಿದೆ, ಅದು ಸೋನು ಗೌಡ, ಸುಧಾರಾಣಿ, ವಿಶಾಲ್ ಹೆಗ್ಡೆ, ಅಚ್ಯುತ್ ಕುಮಾರ್, ಪ್ರಕಾಶ್ ಬೆಳವಾಡಿ ತಮ್ಮ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ.
ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…
ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…
ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…
ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯು…
ಮನೋರಂಜನೆಯ ಮಾತು ಬಂದಾಗಲೆಲ್ಲ ಎಲ್ಲಾ ಮನೆಯ ಟಿವಿಯು ಟ್ಯೂನ್ ಆಗೋದೇ ಜೀ಼ ಕನ್ನಡಕ್ಕೆ. ಕರುನಾಡನ್ನ ದಶಕಗಳಿಂದ ಮನೋರಂಜಿಸುತ್ತ ಬಂದಿರುವ ಜೀ಼…